ಬಹು ಉಪಯೋಗಿ ವೃಕ್ಷ ಸಂಪತ್ತು
ಹಲಸು ತನ್ನ ಕಳೆದುಕೊಂಡ ಹಳೆಯ ಕಾಲದ ಮೆರಗನ್ನು ಪುನಃ ಪಡೆದುಕೊಳ್ಳುತ್ತಿದೆ.
ಹಲಸನ್ನು ತರಕಾರಿಯ ರೀತಿಯಲ್ಲಿ ಬಳಸಲು ಬಹುಶಃ ಹಲವಾರು ತಳಿಗಳು, ಹಿಟ್ಟು ತಯಾರಿಸಲೂ ಹಲವಾರು ತಳಿಗಳು ಉಪಯೋಗಕಾರಿ ಆಗಬಹುದು. ಆದರೂ ಹೆಚ್ಚು ಇಷ್ಟಪಡುವ ತಳಿಗಳು ಇದ್ದೇ ಇರುತ್ತವೆ.
ಉಪ್ಪುಸೊಳೆ ಹಾಕುವುದಕ್ಕೂ (brining), ಕರಿಯುವುದಕ್ಕೆ (frying), ದೋಸೆಗೆ (non-sticking), ಇದೇ ರೀತಿ ಹಣ್ಣಿನ ಉಪಯೋಗಕ್ಕಾಗಿ ಇಷ್ಟಪಡುವ ತಳಿಗಳು ಗುರುತಿಸಲ್ಪಟ್ಟಿರುತ್ತದೆ. ಒಂದೇ ಮರದಲ್ಲಿ ಇವೆಲ್ಲಾ ಗುಣ ಒಂದಾಗಿ ಸಿಗಲು ಸಾಧ್ಯತೆ ಕಡಿಮೆ.
ಡಾ. ಡಿ.ಸಿ. ಚೌಟ ಅವರು ಈ ನಿಟ್ಟಿನಲ್ಲಿ ಹಲಸು ಮೇಳಗಳ ಪಾತ್ರ ಮನಗಂಡು ಮೀಯಪದವು, ಮಂಗಳೂರುಗಳಲ್ಲಿ ಮೇಳ ಆಯೋಜಿಸುತ್ತಿರುವ ವಿಚಾರ ತಿಳಿಯಪಡಿಸಿದರು.
ಮೌಲ್ಯವರ್ಧನೆಯಲ್ಲಂತೂ ಸಾಂಪ್ರದಾಯಿಕ ಹಾಗೂ ವೈವಿಧ್ಯಮಯ ತಿಂಡಿ ತಿನಿಸುಗಳು ನಮ್ಮ ಪ್ರದೇಶದಲ್ಲಿ ಅಪಾರ. ಇದಕ್ಕಾಗಿ ಅಡುಗೆಯಲ್ಲಿ ಮುಂದಿನ ಜನಾಂಗಕ್ಕೆ ಅದರಲ್ಲೂ ಮುಖ್ಯವಾಗಿ ಅಡುಗೆಯ ವೃತ್ತಿಪರ ಶೆಫ್ ಗಳಿಗೆ ಇದರ ಪರಿಚಯ ಹಾಗೂ ತರಬೇತಿ ಅಷ್ಟೇ ಅಲ್ಲ ಅವರ ಮನಸ್ಸಿನಲ್ಲಿ ಇದರ ಬಗ್ಗೆ ಗೌರವ ಬೇಕು. ಇದನ್ನು ಬಡಿದೆಬ್ಬಿಸುವಲ್ಲಿ ಹಲವಾರು ಪ್ರಯತ್ನಗಳನ್ನು ತಾವು ನಡೆಸಿದ್ದಾಗಿಯೂ ಇದರಲ್ಲಿ ಮುಖ್ಯವಾಗಿ ಕೆ.ಎಸ್ ಹೆಗ್ಡೆ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ನಡೆದ ಹಲಸು ಮೇಳದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳನ್ನೂ, ಸ್ಟಾರ್ ಹೋಟೆಲ್ ನ ಶೆಫ್ ಗಳನ್ನೂ ಭಾಗವಹಿಸುವಂತೆ ಮಾಡಿದ್ದಾಗಿಯೂ ಡಾ. ಚೌಟರು ಸ್ಮರಿಸಿಕೊಂಡರು.