ಈ ವಿಷಯದಲ್ಲಿ ಸಂವಾದ ಕ್ಲಬ್ ಹೌಸ್ ಆ್ಯಪ್ ನಲ್ಲಿ ಪಯಸ್ವಿನಿ ವೇದಿಕೆಯಲ್ಲಿ 19 ಸೆಪ್ಟೆಂಬರ್ 2021 ಆದಿತ್ಯವಾರ ಸಂಜೆ 5 ಗಂಟೆಗೆ ನಡೆಯಿತು.
ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು
- ಶ್ರೀ ನಿಟಿಲೆ ಮಹಾಬಲೇಶ್ವರ ಭಟ್ +919448330404
- ಶ್ರೀ ಗಣಪತಿ ಭಟ್, ಕೋಮಲೆ +919632774159
- ಶ್ರೀ ಗಣಪತಿ ಭಟ್ ಎಕ್ಕಡ್ಕ +919480015734
- ಶ್ರೀ ಕೈಲಾರು ಸುಬ್ರಹ್ಮಣ್ಯ ಭಟ್ +919448500866
- ಶ್ರೀ ವೆಂಕಟೇಶ್ವರ ಶರ್ಮ ಕತ್ತರಿಬೈಲು +919686509185
- ಶ್ರೀ ಅನಂತ ಪ್ರಸಾದ ನೈತಡ್ಕ +919611543386
- ಶ್ರೀ ರಾಕೇಶ ಹೆಗಡೆ ಬೆಳ್ತಂಗಡಿ +919964553455
ಪ್ರಸ್ತಾವನೆ
ಪ್ರಾಸ್ತಾವಿಕ ಮಾಹಿತಿ ನೀಡಿದ ಮುರಲಿಕೃಷ್ಣ ಎಡನಾಡು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ವರ್ಷ ನಾವು ಉಪಯುಕ್ತ ಕೃಷಿ ಸಲಕರಣೆಗಳಿಂದ ದೇಶದ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವನ್ನು ಮಾಡಬೇಕು. ಇದರಿಂದ ನಾವು ವಿವಿಧ ಸ್ಥರಗಳಲ್ಲಿ ಸಮೃದ್ಧಿಯನ್ನು ಕಾಣಬಹುದು.
ಕೃಷಿ ಅಭಿವೃದ್ಧಿಗಾಗಿ ಪ್ರಧಾನಮಂತ್ರಿಯವರ ಡೈರೆಕ್ಟ್ ಬೆನಿಫಿಟ್ ಸ್ಕೀಮ್ ನ ಮೂಲಕ ಕೃಷಿಕರಿಗೆ ಉಪಕರಣಗಳನ್ನು ಹಾಗೂ ಯಂತ್ರ ಗಳನ್ನು ಖರೀದಿಸಲು ಸಬ್ಸಿಡಿ ದರದಲ್ಲಿ ವ್ಯವಸ್ಥೆ ಮಾಡಿರುತ್ತಾರೆ. ಇದರಲ್ಲಿ ನೂರಾರು ಉಪಯುಕ್ತ ಉಪಕರಣಗಳು ಲಭಿಸುತ್ತವೆ. ಇವುಗಳನ್ನು ವರ್ಗೀಕರಿಸಿ ತಿಳಿಸುವುದಾದರೆ ಭೂಮಿಯ ತಯಾರಿಸುವಿಕೆ ಗೆ ಉಪಯೋಗಿಸುವ, ಕೃಷಿ ಕೆಲಸಗಳಿಗಾಗಿ ಉಪಯೋಗಿಸುವ, ಸಸ್ಯ ಸಂರಕ್ಷಣೆಗಾಗಿ, ಕೊಯ್ಲು ಮಾಡುವುದಕ್ಕಾಗಿ, ಕೊಯ್ಲಿನ ನಂತರದ ಸಂಸ್ಕರಣೆಗಾಗಿ, ಪ್ಯಾಕೇಜಿಂಗ್ ಉಪಕರಣಗಳು, ಅದೇ ರೀತಿ ಸಾಗಾಟ ಉಪಕರಣಗಳಾಗಿ ಮಾಡಬಹುದು. ನಾವು ದೈನಂದಿನ ಕಾಣುವ ಟಿಲ್ಲರ್, ಟ್ರ್ಯಾಕ್ಟರ್, ಡಿಗ್ಗರ್, ಪ್ಲಾಂಟರ್ ವೀಡರ್, ಸ್ಪ್ರೇಯರ್, ಡ್ರೈಯರ್, ರೋಸ್ಟರ್, ಗ್ರೈಂಡರ್, ಟ್ರೈಲರ್, ಕೈಗಾಡಿಗಳು ಮುಂತಾದ ಹಲವಾರು ಉಪಕರಣಗಳು ಇಂದು ಲಭ್ಯವಿವೆ.
ಇನ್ನು ಮುಂದೆ ರೋಬೋಟಿಕ್ ತಂತ್ರಜ್ಞಾನದ ಉಪಕರಣಗಳು ಕೂಡ ಬರುವ ಸಾಧ್ಯತೆಗಳಿವೆ. ಇವುಗಳನ್ನು ಕೃಷಿಕರು ಅವಶ್ಯಕತೆಗನುಸಾರವಾಗಿ ಬಳಸುವುದರಿಂದ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಿದರು.