ಹಿಂಜರಿತವು ಸೋಲುಣಿಸುವುದು

Paddy-field

ಒಂದು ದಿನ ಮುಂಜಾನೆ
ಹೋದೆ ನಾ ಹೊಲದ ಬಳಿ
ಎಲ್ಲೆಲ್ಲು ತುಂಬಿರುವ ಹಸಿರುರಾಶಿ
ತಂಗಾಳಿಯೊಡನೆ ತುಯ್ದಾಡಿತು ತೆನೆ
ಆಹಾರ ಶೃಂಖಲೆಯ ಮೂಲ ಕೊಂಡಿ
ಪೈರಿನೆಡೆಯಲ್ಲೆಲ್ಲ ತುಂಬಿಕೊಂಡಿಹ ಕಳೆಯು
ಕಂಡಿತು ತೀರ ಬಳಿಸಾರಿದಾಗ
ಕಳೆಯ ಕಂಡಾಗಲೆಲ್ಲಾ ಕಿತ್ತೆಸೆಯ ಬೇಕೆಂಬ
ಹೆತ್ತವರ ಮಾತು ನೆನೆಯಿತು ಮನವು ಆಗ
ಕೆಸರು ಗದ್ದೆಗೆ ಇಳಿದು ಕಳೆಯಕೀಳಲು ನನಗೆ
ಆಲಸ್ಯದಾ ಜಾಡು ಬಿಡಲೇ ಇಲ್ಲ.

ಮನೆಯಲ್ಲಿ ಹೇಳಿದರೆ ಕಳೆ ಕೀಳೋ ಕೆಲಸ ಕೊಡುವರು
ಎಂಬ ಭಯದಲ್ಲಿ ಆ ವಿಷಯ ಉಸುರಲಿಲ್ಲ
ಕಳೆ ಬೆಳೆದು ಪೈರನ್ನು ಪೂರ್ತಿ ಆವರಿಸಿ
ಬೆಳೆಯೆಲ್ಲ ನಾಶವಾಗಿ ಅಪ್ಪ ಕುಸಿದಾಗ
ತಪ್ಪಿನರಿವಾಯ್ತೆನಗೆ ಏನು ಮಾಡುವುದೀಗ?

ಸರಿಯಾದ ಪಾಠವೊಂದನು ಕಲಿತೆ
ಇದರಿಂದ ಸೋಮಾರಿತನವೆಂದು ಕೃಷಿಕನಿಗೆ ಸಲ್ಲ!

ಕೈ ಕೆಸರಾದರೆ ಬಾಯಿ ಮೊಸರೆಂಬ
ಗಾದೆ ಮಾತೆಂದಿಗೂ ಸುಳ್ಳಲ್ಲವಲ್ಲ!!

©Asha P.

Leave a Comment

Your email address will not be published. Required fields are marked *

Scroll to Top