ತಾರೀಕು 28 ರಂದು ಮುಂದುವರಿದ ಕಾರ್ಯಕ್ರಮದಲ್ಲಿ “ಮಣ್ಣಿನ ಸಮಗ್ರತೆಯು ಜೈವಿಕ ಚೈತನ್ಯದ ಆಗರ” ಎಂಬ ಅರ್ಥ ಗರ್ಭಿತ ಮಾತು ಶ್ರೀ ಮುರಲೀಕೃಷ್ಣಅವರಿಂದ ಕೇಳಿ ಬಂತು.
ಮಣ್ಣಿನಲ್ಲಿರುವ ಸೂಕ್ಶ್ಮಾಣುಗಳ ಕಾರ್ಯ ಚಟುವಟಿಕೆಗಳಿಂದ ಮಣ್ಣಿನ ಫಲವತ್ತತೆ ಹೆಚ್ಹಗುವುದಲ್ಲದೆ, ಬೇರಿನ ವಲಯದಲ್ಲಿ ರೋಗ ಪ್ರತಿರೋಧಕತೆ ಹಾಗೂ ಸೂಕ್ಶ್ಮಾಣುಗಳ ಸಂಜ್ಞಾ ವಾಹಿನಿ ಕ್ರಿಯೆಗಳಿಂದ ಡೈನಾಮಿಕ್ ಪರಿಸರ ನಿರ್ಮಾಣವಗುತ್ತದೆ.
ಜೀವ ವೈವಿಧ್ಯದಿಂದ ಪರಿಸರ ಸಮತೋಲನ, ಗಿಡ ಗಂಟೆಗಳಾದ ಚೆಂಡು ಹೂವು, ಗರಿಕೆ, ಮಜ್ಜಿಗೆ ಹುಲ್ಲು, ಬೆಳ್ಳುಳ್ಳಿ, ಎಕ್ಕೆ ಗಿಡ (Calotropis), ನೆಕ್ಕಿ (Vitex), ಹರಳು ಗಿಡ, ಇವುಗಳಿಂದ ಬಯೋ ಎಂಜಿನಿಯರಿಂಗ್, ಕೀಟಾಪಕರ್ಷಕ ವೃಕ್ಷಗಳಾದ ಹೊಂಗೆ, ಕಹಿ ಬೇವು, ಅಣಲೆಕಾಯಿ, ನೆಲ್ಲಿ ಸೊಪ್ಪು, ಕಾಸರಕ, ಸಂಪಿಗೆ ಹೂವು ಇಂತಹವುಗಳ ಉಪಯೋಗದಿಂದ ರಾಸಾಯನಿಕ ರಹಿತ ಕೃಷಿ ಸಾಧ್ಯ ಎಂಬ ಆತೀ ಮುಖ್ಯ ಸೂಚನೆಗಳನ್ನು ನೀಡಿದರು.
Pingback: ಗೋಆಧಾರಿತ ಕೃಷಿಯಿಂದ ಅಡಿಕೆ ತೋಟಕ್ಕೆ ರೋಗ ಕಡಿಮೆ — ಆದಾಯ ಹೆಚ್ಚು - Payaswini—Contemporary Spurts