ಒಮ್ಮೆ ವಿಠಲ ಮಾವನ ಮಗ ಊರಿಗೆ ಬಂದಿದ್ದ. ಅವನಿಗೆ ಭೂತದ ಬಗ್ಗೆ ಬಲವಾದ ನಂಬಿಕೆಯೇನೂ ಇರಲಿಲ್ಲವಂತೆ. ಏನಿದು ಗೆಜ್ಜೆಯ ಸದ್ದು? ಎಂಬ ಕುತೂಹಲದಿಂದ ರಾತ್ರಿ ಆತ ಅಪ್ಪನಲ್ಲಿ ಹೇಳದೆ ನೀರಿನ ಕೊಳದ ಬಳಿಗೆ ನಡೆದನಂತೆ. ಗೆಜ್ಜೆಯ ಸದ್ದನ್ನ ಕೇಳಿ ಮಾತ್ರವಲ್ಲ ಕಣ್ಣಾರೆ ಕಂಡು ಬಂದನವ!. “ಅಪ್ಪಾ, ಕೊರತ್ತಿಯ ಗೆಜ್ಜೆ ಕುಣಿತವನ್ನ ನಾನು ನೋಡಿ ಬಂದೆ!” ಎಂದಾಗ ವಿಠಲ ಮಾವನಿಗೆ ಒಂದು ಕ್ಷಣ ಎದೆ ಧಸಕ್ಕೆಂದು ಬಿಡ್ತು. “ಅಪ್ಪಾ, ಹೆದರ ಬೇಡ. ಅದು ಯಾವ ಭೂತವೂ ಅಲ್ಲ. ಏನೆಂದು ಹೇಳಬೇಕೇ? ರಾತ್ರಿ ಜೀರುಂಡೆ ಕೀಟ ಕೂಗಿದಾಗಲೆಲ್ಲ ನೀರಿನ ಝರಿಯ ಸದ್ದಿನೊಂದಿಗೆ ಸೇರಿ ಗೆಜ್ಜೆಯ ಕುಣಿತದಂತೆ ಕೇಳಿಸುತ್ತದೆ! ಅದು ಬಿಟ್ಟರೆ ಬೇರೇನೂ ಹೆದರುವ ಹಾಗಿಲ್ಲಪ್ಪ”, ಎಂದನವ.
ಇನ್ನೊಮ್ಮೆ ಅಜ್ಜಿಯಲ್ಲಿ, ಅಡಿಕೆ ತೋಟ ಕಾಯುವ ಐತ್ತಪ್ಪನ ಹೆಂಡತಿ ಕೆಲಸದ ಕಮಲಿ, ಒಂದು ದಿನ “ಅಕ್ಕಾ, ನಮ ತೋಟೊಡು ಪುಲ್ಯಾಲೊಗು ಕೊರತ್ತಿ ಭೂತೊ ತೂತೆರಿಗೆ ಎನ ಕಂಡಣಿ” (ಅಕ್ಕಾ..,ನಮ್ಮ ತೋಟದಲ್ಲಿ ಪ್ರಾತಃಕಾಲ ಕೊರತ್ತಿ ಭೂತವನ್ನು ನನ್ನ ಗಂಡ ನೋಡಿದ್ದಾರಂತೆ.) ಎಂದಾಗ ಅದು ಎಲ್ಲಿ? ತೋಟದ ಯಾವ ಭಾಗದಲ್ಲಿ? ವಿವರ ಕೇಳಿಕೊಂಡಳಂತೆ ಅಜ್ಜಿ.
ಧನ್ಯವಾದಗಳು ಪ್ರಕಟಿಸಿದ ಸಂಪಾದಕರಿಗೆ