ಟೀಕೆಯಿಂದ ಗೆಲ್ಲುವ ಮನೋಭಾವ
ಸಮಾಜದಲ್ಲಿ ಎಲ್ಲರೂ ಒಂದೇ ತೆರನಾಗಿರಲಾರರು. ನಮ್ಮ ಕೈಬೆರಳು ಕೂಡಾ ಒಂದೇ ತೆರನಾಗಿಲ್ಲ, ಅಂತೆಯೇ. ಇವುಗಳಲ್ಲಿ ಯತಾರ್ಥತೆಗೆ ಹೊರತಾಗಿ ಕಲ್ಪನಾತೀತವೇ ಅಧಿಕ ಎನ್ನಬಹುದು. ಇಂತಹ ಟೀಕೆಗಳಲ್ಲಿ ಅಸೂಯಾಪರ ಮನೋಭಾವವಿದ್ದು ಈ ಮೂಲಕ ಅಂಥವರು ತೃಪ್ತಿ ಪಡೆಯುತ್ತಿರಬಹುದು. ಹೆಚ್ಚಿನ ಟೀಕಾಕಾರರೂ ತಮಗೆ ದೊರೆಯದ ಅಥವಾ ತಾನು ಸಾಧಿಸಲಾಗದ್ದನ್ನು ಅನ್ಯರು ಸಾಧಿಸಿದರೆ, ವಿಕೃತ ಸಂತೋಷಿಗಳು ಈ ಮೂಲಕ ಸಮಾಧಾನ ಪಟ್ಟುಕೊಳ್ಳುತ್ತಾರೆ. ನಾವು ಯಾವುದೇ ಕೆಲಸವನ್ನ ಎಷ್ಟೇ ಸಮರ್ಥವಾಗಿ ಮಾಡಿದರೂ ಯಾವುದೋ ಒಂದು ಮೂಲೆಯಲ್ಲಿ ಟೀಕಿಸುವಾತ ಇಲ್ಲ ಎಂದು ಹೇಳಲಾಗದು. ಈ ರೀತಿಯ ದುಷ್ಟ ಹಂಚಿಕೆಗಳು ನಮ್ಮ ಮನ ನೋಯಿಸದೇ ಇರಲು ಸಾಧ್ಯವಿಲ್ಲ.
ಟೀಕೆಯು ನಾವು ಜಾಗೃತರಾಗಲು ಸಮಾಜ ನಿರ್ಮಿಸಿದ ಎಚ್ಚರಿಕೆಯ ಗಂಟೆ ಎಂಬುದಾಗಿ ನಾವು ತಿಳಿದುಕೊಂಡಲ್ಲಿ ನಮ್ಮ ಆರೋಗ್ಯಕ್ಕೂ ಹಿತವಾಗುವುದರೊಂದಿಗೆ ಆ ಮನೋಭಾವ ಬೆಳೆಸಿಕೊಳ್ಳುವುದು ಉತ್ತಮ. ದೇಹ ಮತ್ತು ಮನಸ್ಸುಗಳಿಗೆ ಕೆಟ್ಟ ಪರಿಣಾಮವಾಗದು.
ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿಗೊಂಡು ಅವುಗಳನ್ನು ಅಲ್ಲಗಳೆಯುವ ಅಥವಾ ಆ ತೆರನ ಮಾತುಗಳಿಗೆ ನಾವು ಕಿವುಡರಾಗಿ ವರ್ತಿಸುವ ಮನೋಭಾವ ಬೆಳೆಸಿಗೊಳ್ಳುವುದೇ ಉತ್ತಮ. ಜೀವನದಲ್ಲಿ ನಮಗೆ ಸಂತೋಷ ಪಡುವ ಹಕ್ಕಿದೆ. ಆದರೆ ಅನ್ಯರ ಸಂತೋಷ ಕಿತ್ತುಕೊಂಡಲ್ಲ ಎಂಬುದನ್ನು ಮರೆಯುವಂತಿಲ್ಲ.